ಹೆಂಡಗಡಂಗಿನ ಚಿತ್ರ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ
ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು
ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ
ಮನುಷ್ಯನಂತೇ ಆಗಿಹೋಗಿವೆಯೇನೊ.

ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇನ್ನೂ ಮೇಲೆದ್ದಿಲ್ಲ.
ಉಡುಪು ಮಾಸಿಲ್ಲ, ಪ್ರೇಮ ಮಾತ್ರ ಬೆಂಕಿಯಂತೆ ಉರಿದು ಹೋಗುತಿದೆ.
ಮಳೆಗಾಲದ ಬಣ್ಣಬಣ್ಣದ ಚಿಟ್ಟೆಗಳು ಒಳಸುಳಿದು ಹೂದೋಟದತ್ತ ಹಾರಿಹೋಗಲಾರಂಭಿಸಿವೆ.

ಹುಲಿ ಆಡಿಸುವವನು ಈಗಷ್ಟೇ ಪೀಪಾಯಿ ಘಾಟು ಹೆಂಡ ಏರಿಸಿ,
ಜನರ ಮಧ್ಯೆಯೇ ನಡೆದುಹೋಗಿದ್ದಾನೆ.

ವಸಂತಮಾಸದ ಹಿರಿಮೆಯಲಿ ಹಿಗ್ಗುವ ಪ್ರಕೃತಿ ಸೌಂದರ್ಯದ ಮೋಹಕಪ್ರಭೆ – ಹೆಂಡಗಿರಾಕಿಗಳನ್ನು
ಯಥೇಚ್ಛವಾಗಿ ಕರೆತರುತ್ತಿದೆ.
ದಮ್ಮಡಿಯಿಲ್ಲದೆ ಕುಡಿದವನೊಬ್ಬ ಅಡವಿಟ್ಟು ಹೋದ ಸ್ಯಾಕ್ಸಫೋನ್
ಇನ್ನೂ ಅಡ್ಡಗೋಡೆಯ ಮೇಲಿದೆ.

ತಡಿಕೆ ಮರೆಯಲ್ಲಿ ಹಂದಿಬಾಡಿನ ಚಾಕಣ ಉರಿಯುತ್ತಿದ್ದವಳು ಮಾತ್ರ
ಅಂದು ಗೈರು ಹಾಜರು.  ಹಸಿ ನೆಲಗಡಲೆ, ಆಲೂಗಡ್ಡೆ ನಂಜಿಕೊಳ್ಳುವ
ಕುಡುಕರಿಗೆ ಅವಳ ಚಿಂತೆಯೇ ಇಲ್ಲ.

ನಾಲ್ಕೈದು ಬಾತುಕೋಳಿಗಳೊಂದಿಗೆ ಬಂದು ಮೂಲೆ ಸೇರಿದ ಬೇಟೆಗಾರ-
ಅಂದಿನ ಶೌರ್ಯ ಸಾಹಸಗಳ ವರ್ಣನೆ ಮಾಡುತ್ತಲೇ ನೆಲಕ್ಕೆ ಬೀಳುತ್ತಾನೆ.

ಕಾಲವನ್ನೇ ಮೀರಿ ಮುನ್ನಡೆಯುವ ಹೆಂಡಗಡಂಗು-
ಕ್ಷಣಕಾಲ ನಿಂತು ನಡೆದಂತೆಯೂ ಭಾಸವಾಗುತ್ತಿತ್ತು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರುಣಿಕರು ಕೊಟ್ಟ ಅರಪಾವ ಜೋಳ
Next post ಡೊಂಕು ಬಾಲದ ನಾಯಕರೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys